ಈಗ ಎಲ್ಲಿ ನೋಡೊದರೂ ಬರಿ ಅಕ್ಕಿಯದೇ ಹವಾ. ಕಾಂಗ್ರೇಸ್ ಸರ್ಕಾರ 1 ರೂಗೆ ಹಕ್ಕಿ ಕೊಟ್ಟರೆ ಕೂಲಿ ಕಾರರ ಸಮಸ್ಯೆಯುದ್ಭವವಾಗುತ್ತದೆ. ಜನ ಸೋಮಾರಿಗಳಾಗುತ್ತಾರೆ. ಹತ್ತಿಪ್ಪತ್ತು ಎಕರೆ ಹೊಂದಿರುವ ಭೂಮಾಲಿಕರಿಗೆ ಸಮಸ್ಯೆಯುಂಟಾಗುತ್ತದೆ. 30 ಕೆಜಿ ಅಕ್ಕಿಯನ್ನು 10 ರೂ ಧರದಲ್ಲಿ ಅಂಗಡಿಗಳಿಗೆ ಮಾರಿಕೊಳ್ಳುತ್ತಾರೆ. ಸರ್ಕಾರ ಜನರನ್ನು ಭಿಕ್ಷಕರನ್ನಾಗಿ ನೋಡುತ್ತಿದೆಯೇ ? ಹೀಗೆ ಹತ್ತಲವು ಗುಮಾನಿಗಳು ಮಾಧ್ಯಮಗಳನ್ನು ಬಿಡದೆ ಕಾಡುತ್ತದೆ. 1 ರೂಪಾಯಿಗೆ ಅಕ್ಕಿಕೊಟ್ಟರೆ ಕೊಡಲಿ ಬಿಡಿ ನಿಮ್ಮ ಗಂಟೇನೋಗುತ್ತೆ. ಆದರೆ ಬರಿ ಅಕ್ಕಿಯನ್ನು ಕೊಟ್ಟ ಮಾತ್ರಕ್ಕೆ ಸೋಮಾರಿಗಳಾಗುತ್ತಾರ ?. ಬರಿ ಅಕ್ಕಿಯನ್ನೇ ತಿಂದು ಬದುಕಲಾಗುತ್ತ ಸ್ವಾಮಿ ?. ನಿಜವಾದ 100 ಜನ ಬಡವರಲ್ಲಿ ಶೇ 70% ಜನಕ್ಕೆ ಇದರಿಂದ ಒಳಿತಾಗುವುದಾದರೆ ಹಾಗಲಿ ಬಿಡಿ. ಉಳಿದ 30% ಕೆಲಸಕ್ಕೆ ಬಾರದ ಜನ, ಸೋಮಾರಿಗಳಾಗಿ, 10 ರೂ ಧರದಲ್ಲಿ ಮಾರಿಕೊಂಡು ಹಾಳಾಗಿಹೋದರೂ ಅವರ ಕರ್ಮವೆಂದು ಬಿಟ್ಟುಬಿಡೋಣ. ಬಿಜೆಪಿ ಸರ್ಕಾರ ಒಬ್ಬ ವ್ಯಕ್ತಿಗೆ 4 ಕೆ.ಜಿ ತೂಕದಲ್ಲಿ 3 ರೂಪಾಯಿಗೆ ಅಕ್ಕಿ ಕೊಡುತ್ತಿತ್ತು. ಒಂದು ಗುಡಿಸಲಲ್ಲಿ ಒಬ್ಬ ಮುದುಕಿಯೋ, ಅಥವಾ ಒಬ್ಬ ಕಾಲು ಕಳೆದುಕೊಂಡ ವ್ಯಕ್ತಿಯೋ ಜೀವನ ನಡೆಸುತ್ತಿದ್ದರೆ 30 ದಿನಗಳಿಗೆ 4 ಕೆ.ಜಿ ಅಕ್ಕಿಯನ್ನು ಕೊಟ್ಟರೆ ಅವನು ತಿಂದು ಬದುಕಲಾಗುತ್ತಾ ?. ಕೊಡಲಿ ಬಿಡಿ ಇಂಥ ಅಸಹಾಯಕರು 30 ದಿನಗಳೂ ಇದರ ಸದುಪಯೋಗವನ್ನು ಪಡೆದುಕೊಂಡರೆ ತಪ್ಪೇನು ?. ಬಿ.ಪಿ.ಎಲ್ ಕುಟುಬಂಗಳೆಂದರೆ ಬರಿ ಬಡವರೆಂದೇಕೆ ಪರಿಗಳಿಸುತ್ತೀರಿ ಇದರ ಸದುಪಯೋಗವನ್ನು ಪರೆಯುತ್ತಿರುವುದು ಉಳ್ಳವರೇ ಎಂದರೆ ತಪ್ಪಗಲಾರದೂ ?. ಅಂಥವರು ಬೇಕಾದರೇ ಕಾಳಸಂತೆಗಳಲ್ಲಿ ಅಕ್ಕಿಯನ್ನು ಮಾರಿಕೊಳ್ಳುತ್ತಾರೆ ಎಂದರೆ ಒಪ್ಪಬಹುದು. ಇಂಥ ಸಣ್ಣ ತನದ ಯೋಚನೆಗಳನ್ನು ಬಿಟ್ಟು ಮೊದಲು ಬಡವರೆಂದರೆ ಯಾರು ಎಂಬುದನ್ನು ಗುರ್ತಿಸಿ ಸ್ವಾಮಿ. ಅವರಿಗೆ ಮೂಲಭೂಲ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿ ಪಡಿಸಲು ಚಿಂತಿಸಿ. ಮೊದಮೊದಲು ಯಾವುದೇ ಒಳ್ಳೆಯ ಕಾರ್ಯಕ್ಕೂ ವಿಜ್ಞಗಳು ಸಹಜ, "ಬದುಕನ್ನು ಕೇವಲ ಒಂದು ದೃಷ್ಟಿಕೋನದಿಂದ ನೋಡಲಾಗದು. ಅದರ ಓಳ ಸುಳಿಗಳ ಮರ್ಮವನ್ನು ತಿಳಿದಾಗಲೇ ಬದುಕಿನ ಅರ್ಥ ಗೋಚರವಾಗುತ್ತದೆ". 1 ರೂಪಾಯಿಗೆ 30 ಕೆ.ಜಿ ಅಕ್ಕಿ ಕೊಟ್ಟ ಮಾತ್ರಕ್ಕೆ ಬಡವರೆಲ್ಲರೂ ಕೆಲಸಕ್ಕೆ ಬಾರದಜನರಾಗುತ್ತಾರೆ. ಸೋಮಾರಿಗಳಾಗುತ್ತಾರೆ ಎಂಬುದು ದಡ್ಡತನದ ಪರಮಾವಧಿ. ಅವರಿಗೂ ಅವರ ಮಕ್ಕಳ ಬದುಕಿಗಾಗಿ ತಮ್ಮ ಶ್ರೋಯೋಭಿಲಾಶೆಗಾಗಿ ದುಡಿಯಲೇ ಬೇಕಾದ ಅನಿರ್ಯತೆಯಿದೆ. ಚಿಂತನೆಯುಳ್ಳವರು ಇದನ್ನೆಲ್ಲಾ ಮನಗಂಡು ಯೋಚಿಸಿ ಮುಂದೆ ಹೆಜ್ಜೆಯಿಡುವುದು ಸೂಕ್ತವೆಂದು ನನ್ನ ಅನಿಸಿಕೆ.
~ವಸಂತ್ ಕೋಡಿಹಳ್ಳಿ
ಚಿತ್ರಕೃಪೆ: premiumtimesng.com
~ವಸಂತ್ ಕೋಡಿಹಳ್ಳಿ
ಚಿತ್ರಕೃಪೆ: premiumtimesng.com










