Friday, May 17, 2013

ಒಂದು ರೂಪಾಯಿ ಕೆ.ಜಿ ಅಕ್ಕಿ

          ಈಗ ಎಲ್ಲಿ ನೋಡೊದರೂ ಬರಿ ಅಕ್ಕಿಯದೇ ಹವಾ. ಕಾಂಗ್ರೇಸ್ ಸರ್ಕಾರ 1 ರೂಗೆ ಹಕ್ಕಿ ಕೊಟ್ಟರೆ ಕೂಲಿ ಕಾರರ ಸಮಸ್ಯೆಯುದ್ಭವವಾಗುತ್ತದೆ. ಜನ ಸೋಮಾರಿಗಳಾಗುತ್ತಾರೆ. ಹತ್ತಿಪ್ಪತ್ತು ಎಕರೆ ಹೊಂದಿರುವ ಭೂಮಾಲಿಕರಿಗೆ ಸಮಸ್ಯೆಯುಂಟಾಗುತ್ತದೆ. 30 ಕೆಜಿ ಅಕ್ಕಿಯನ್ನು 10 ರೂ ಧರದಲ್ಲಿ ಅಂಗಡಿಗಳಿಗೆ ಮಾರಿಕೊಳ್ಳುತ್ತಾರೆ. ಸರ್ಕಾರ ಜನರನ್ನು ಭಿಕ್ಷಕರನ್ನಾಗಿ ನೋಡುತ್ತಿದೆಯೇ ? ಹೀಗೆ ಹತ್ತಲವು ಗುಮಾನಿಗಳು ಮಾಧ್ಯಮಗಳನ್ನು ಬಿಡದೆ ಕಾಡುತ್ತದೆ. 1 ರೂಪಾಯಿಗೆ ಅಕ್ಕಿಕೊಟ್ಟರೆ ಕೊಡಲಿ ಬಿಡಿ ನಿಮ್ಮ ಗಂಟೇನೋಗುತ್ತೆ. ಆದರೆ ಬರಿ ಅಕ್ಕಿಯನ್ನು ಕೊಟ್ಟ ಮಾತ್ರಕ್ಕೆ ಸೋಮಾರಿಗಳಾಗುತ್ತಾರ ?. ಬರಿ ಅಕ್ಕಿಯನ್ನೇ ತಿಂದು ಬದುಕಲಾಗುತ್ತ ಸ್ವಾಮಿ ?. ನಿಜವಾದ 100 ಜನ ಬಡವರಲ್ಲಿ ಶೇ 70% ಜನಕ್ಕೆ ಇದರಿಂದ ಒಳಿತಾಗುವುದಾದರೆ ಹಾಗಲಿ ಬಿಡಿ. ಉಳಿದ 30% ಕೆಲಸಕ್ಕೆ ಬಾರದ ಜನ, ಸೋಮಾರಿಗಳಾಗಿ, 10 ರೂ ಧರದಲ್ಲಿ ಮಾರಿಕೊಂಡು ಹಾಳಾಗಿಹೋದರೂ ಅವರ ಕರ್ಮವೆಂದು ಬಿಟ್ಟುಬಿಡೋಣ. ಬಿಜೆಪಿ ಸರ್ಕಾರ ಒಬ್ಬ ವ್ಯಕ್ತಿಗೆ 4 ಕೆ.ಜಿ ತೂಕದಲ್ಲಿ 3 ರೂಪಾಯಿಗೆ ಅಕ್ಕಿ ಕೊಡುತ್ತಿತ್ತು. ಒಂದು ಗುಡಿಸಲಲ್ಲಿ ಒಬ್ಬ ಮುದುಕಿಯೋ, ಅಥವಾ ಒಬ್ಬ ಕಾಲು ಕಳೆದುಕೊಂಡ ವ್ಯಕ್ತಿಯೋ ಜೀವನ ನಡೆಸುತ್ತಿದ್ದರೆ 30 ದಿನಗಳಿಗೆ 4 ಕೆ.ಜಿ ಅಕ್ಕಿಯನ್ನು ಕೊಟ್ಟರೆ ಅವನು ತಿಂದು ಬದುಕಲಾಗುತ್ತಾ ?. ಕೊಡಲಿ ಬಿಡಿ ಇಂಥ ಅಸಹಾಯಕರು 30 ದಿನಗಳೂ ಇದರ ಸದುಪಯೋಗವನ್ನು ಪಡೆದುಕೊಂಡರೆ ತಪ್ಪೇನು ?. ಬಿ.ಪಿ.ಎಲ್ ಕುಟುಬಂಗಳೆಂದರೆ ಬರಿ ಬಡವರೆಂದೇಕೆ ಪರಿಗಳಿಸುತ್ತೀರಿ ಇದರ ಸದುಪಯೋಗವನ್ನು ಪರೆಯುತ್ತಿರುವುದು ಉಳ್ಳವರೇ ಎಂದರೆ ತಪ್ಪಗಲಾರದೂ ?. ಅಂಥವರು ಬೇಕಾದರೇ ಕಾಳಸಂತೆಗಳಲ್ಲಿ ಅಕ್ಕಿಯನ್ನು ಮಾರಿಕೊಳ್ಳುತ್ತಾರೆ ಎಂದರೆ ಒಪ್ಪಬಹುದು. ಇಂಥ ಸಣ್ಣ ತನದ ಯೋಚನೆಗಳನ್ನು ಬಿಟ್ಟು ಮೊದಲು ಬಡವರೆಂದರೆ ಯಾರು ಎಂಬುದನ್ನು ಗುರ್ತಿಸಿ ಸ್ವಾಮಿ. ಅವರಿಗೆ ಮೂಲಭೂಲ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿ ಪಡಿಸಲು ಚಿಂತಿಸಿ. ಮೊದಮೊದಲು ಯಾವುದೇ ಒಳ್ಳೆಯ ಕಾರ್ಯಕ್ಕೂ ವಿಜ್ಞಗಳು ಸಹಜ, "ಬದುಕನ್ನು ಕೇವಲ ಒಂದು ದೃಷ್ಟಿಕೋನದಿಂದ ನೋಡಲಾಗದು. ಅದರ ಓಳ ಸುಳಿಗಳ ಮರ್ಮವನ್ನು ತಿಳಿದಾಗಲೇ ಬದುಕಿನ ಅರ್ಥ ಗೋಚರವಾಗುತ್ತದೆ". 1 ರೂಪಾಯಿಗೆ 30 ಕೆ.ಜಿ ಅಕ್ಕಿ ಕೊಟ್ಟ ಮಾತ್ರಕ್ಕೆ ಬಡವರೆಲ್ಲರೂ ಕೆಲಸಕ್ಕೆ ಬಾರದಜನರಾಗುತ್ತಾರೆ. ಸೋಮಾರಿಗಳಾಗುತ್ತಾರೆ ಎಂಬುದು ದಡ್ಡತನದ ಪರಮಾವಧಿ. ಅವರಿಗೂ ಅವರ ಮಕ್ಕಳ ಬದುಕಿಗಾಗಿ ತಮ್ಮ ಶ್ರೋಯೋಭಿಲಾಶೆಗಾಗಿ ದುಡಿಯಲೇ ಬೇಕಾದ ಅನಿರ್ಯತೆಯಿದೆ. ಚಿಂತನೆಯುಳ್ಳವರು ಇದನ್ನೆಲ್ಲಾ ಮನಗಂಡು ಯೋಚಿಸಿ ಮುಂದೆ ಹೆಜ್ಜೆಯಿಡುವುದು ಸೂಕ್ತವೆಂದು ನನ್ನ ಅನಿಸಿಕೆ.

~ವಸಂತ್ ಕೋಡಿಹಳ್ಳಿ

ಚಿತ್ರಕೃಪೆ: premiumtimesng.com


Thursday, January 17, 2013

ಮುನ್ನುಡಿ



(1)
ಅಂದು ಅವಳೆಲ್ಲೊ
ನಾನೆಲ್ಲೋ
ಕಾಲವು ಮೆಲ್ಲಗೆ ಸರಿದು
ಇಂದು ನಮ್ಮಿಬ್ಬರನ್ನು
ಒಂದುಗೂಡಿಸಿ
ನಿಮ್ಮೆದಿರು ನಿಲ್ಲುವಂತೆ
ಮಾಡಿದೆ

(2)
"ಎತ್ತಣ ಮಾಮರ
ಎತ್ತಣ ಕೋಗಿಲೆ
ಎತ್ತಣದಿಂದ್ ಎತ್ತಣ
ಸಂಬಂಧವಯ್ಯಾ" ಎಂಬ
ಕವಿ ವಾಣಿಯಂತೆ
ನಮ್ಮಯ ಜೋಡಿ
ಕೆಲವರಲ್ಲಿ ಆಶ್ಚರ್ಯವನ್ನೂ
ಆನಂದವನ್ನೂ ಅದರಂತೆಯೇ
ಅಸೂಯೆಯನ್ನೂ
ಮೂಡಿಸಬಹುದು

(3)
ಯಾರು
ಏನೆಂದುಕೊಂಡರೂ
ಇಂದಿಗೆ ಜೀವನದ
ಒಂದು ಘಟ್ಟವನ್ನಂತೂ
ತಲುಪಿಯಾಯಿತು
ಕಷ್ಟಗಳೋ, ನಷ್ಟಗಳೋ
ಅಥವಾ ಸುಖಯೋಗದ
ವೈಭವ ಕ್ಷಣಗಳೋ
ಅವಳು ನಾನೆಂಬ
ನೆರಳಿನಾಟದಲ್ಲಿ
ತಣ್ಣಗೆ ಸರಿದುಹೋಗುತ್ತವೆ

(4)
ಹೊಸ್ತಿಲಲ್ಲಿ ನಿಂತು
ನಿಮ್ಮೆಲ್ಲರ ಆಶೀರ್ವಚನಕ್ಕಾಗಿ
ಕಾತರದಿಂದ ಕಾಯುತ್ತಿದ್ದೇವೆ
ನೀವು ಆನಂದದಿಂದ
ಆಶೀರ್ವದಿಸಿದರೂ
ಹಲ್ಲು ಕಡಿದು ಶಪಿಸಿದರೂ
ತೃಪ್ತಿಯಿಂದಲೇ ಸ್ವೀಕರಿಸುತ್ತೇವೆ
ಹೊಸ ಆಶಯಯದೊಂದಿಗೆ
ನೂರಾರು ಕನಸುಗಳನ್ನೊತ್ತು
ಹೊಸ ಬಾಳಿನೆಡೆ ಸಂತಸದಿಂದ
ನಡೆದು ಸಾಗುತ್ತೇವೆ
ಈ ನವ ಉದಯಕ್ಕೊಂದು
ಮುನ್ನುಡಿ ಬರೆಯಲಿಚ್ಚಿಸುತ್ತೇವೆ.

Saturday, December 22, 2012

ಮಧ್ಯಂತರ

ಬೇಕು ಬೇಡುಗಳ ನಡುವೆ
ಅಮ್ಮು ಬಿಮ್ಮಿನ ಕೂಗಾಟಗಳು
ಮೇಲು ಕೀಳನ ಗೋಳಾಟಗಳು
ಅರ್ಥವಾಗದ ಬೈಗುಳಗಳು
ಅವಸರದ ತೀರ್ಮಾನಗಳು
ಮಸಿಯುತಿವೆ ಕತ್ತಿಗಳ
ಅವಮಾನದ ನೆಲದಲ್ಲಿ

ಅವರಿವರ ರಗಳೆಗಳು
ಬಡಿದಾಟ ಹೊಡೆದಾಟಗಳು
ಅಧಿಕಾರ ಆವೇದನೆಗಳು
ಆಕ್ರೋಶ ಅವತಾರಗಳು
ಯಾರದು ಸರಿಯೋ
ಇನ್ಯಾರದು ಸರಿಯಲ್ಲವೋ
ಎಣಿಸುದೆ ಮೌನದಲಿ
ಕಾಲ ಗರ್ಭದ ನಡೆಯು.

ಹಾರು ಮನವೇ

ಹಾರು ಮನವೇ ಹಾರು
ಮಗಿಲಿನೆತ್ತರಕ್ಕೆ ಹಾರು
ಎಲ್ಲಿಯೂ ನಿಲ್ಲದೆ
ಚಿಂತೆ ಬಿಟ್ಟು ಹೇರು

ಭಾವನೆಗಳ ಸೀಳಿ ಹಾರು
ಬಯಕೆಗಳ ತುಳಿದು ಹಾರು
ಚಿಂತೆಗಳ ಒದ್ದು ಹಾರು
ಬಾಂದಳವ ಸುತ್ತ ತಿರುಗಿ
ಹಾರು ಮನವೇ ಎಲ್ಲಿಯೂ
ನಿಲ್ಲದೆ ಹಾರು ಹಾರು

ನವಿಲಿನಂತೆ ಹಾರು
ಮೇಗದಂತೆ ತೋರು
ನಗುನಗುತ ಹಾರು
ನಕ್ಷತ್ರದಂತೆ ಹೇರು
ಹಾರು ಮನವೇ ಎಲ್ಲಿಯೂ
ನಿಲ್ಲದೆ ಹಾರು ಹಾರು

ಕನಸುಗಳ ಕದ್ದು ಹಾರು
ನಲಿವುಗಳ ಗೆದ್ದು ಹಾರು
ಚಂದ್ರನಂತೆ ಹಾರು
ಸೂರ್ಯನಂತೆ ತೋರು
ಹಾರು ಮನವೇ ಎಲ್ಲಿಯೂ
ನಿಲ್ಲದೆ ಹಾರು ಹಾರು.

ಮಾರಾಟ

ಆತ್ಮ: ಡಾಕ್ಟ್ರೆ ಆ 23 ನೇ ನಂಬರಿನ ಕೋಣೆಯಲ್ಲಿ ನನ್ನ ಶವ ಇರಬೇಕಿತ್ತಲ್ಲ ಯಾಕೆ ಏನಾಯಿತು ?.

ಡಾಕ್ಟರ್: ಅಯ್ಯೋ ಹೋಗು ಹೋಗು ಇಂತ ಪಿಚಾಚಿಗಳನ್ನ ನಾನೆಷ್ಟು ನೋಡಿಲ್ಲ ಅದನ್ನ ಈಗಾಗಲೇ ಮತ್ತೊಬ್ಬರಿಗೆ ಮೂರು ಸಾವಿರಕ್ಕೆ ಮಾರಿಯಾಯಿತು ಇನ್ನೆಲ್ಲಿ ಶವ !!!.

ದುಬಾರಿ ಪ್ರೀತಿ

ಆ ಪೆಟ್ಟು ತಿಂದು ಬಿದ್ದಿರುವಂತ
ಸಿಲ್ವರ್ ಪಾತ್ರೆಯಲ್ಲಿ ನನ್ನ ಕನಸುಗಳನ್ನು
ಅರಳಿಬಿಟ್ಟಿದ್ದೇನೆ ಅವುಗಳನ್ನು
ನಿನ್ನಿಂದ ಪೋಶಿಸಲು ಸಾಧ್ಯವಾಗುವುದೇ ಗೆಳತಿ ?.

ಅಯ್ಯೋ ಜಮಾನ ಬಹಳ ಬದಲಾಗಿದೆ
ಈಗೇನಿದ್ದರೂ ಪಿಜ್ಜಾ ಬರ್ಗರ್
ತಿಂದು ಬದುಕುವಂತ ಕಾಲ
ಖಂಡಿತ ನನ್ನಿಂದ ಸಾಧ್ಯವಿಲ್ಲ ಗೆಳೆಯ !.

Wednesday, November 7, 2012

ಅವಳ ಕಾರ್ಯ



ಅದೃಷ್ಟ


Friday, October 12, 2012

ನನ್ನವಳು


Tuesday, September 25, 2012

ಸಖಿ

ಸಖೀ...
ನೀ ಮುಸುಕು ಸರಿಸಿ
ನಲ್ಲನ ಮುಖ ನೋಡುವ ಪರಿ
ಇದೆಂತ ಛಾಯೆಯೋ
ನಾ ಕಾಣೆ ನನ್ನಾಣೆ

ಎದೆಯುಲಿ ಢವ ಢವ
ಮನಸ್ಸು ವಿಲವಿಲನೆ ಒದ್ದಾಟ
ಎತ್ತ ಎಳೆದೊಯ್ಯುತಿದೆ
ನನ್ನ ಅಂತರಂಗವನು
ನನಗೂ ತಿಳಿಸದಂತೆ

ಅವಳೆನ್ನ ಭಾಮಿನಿ
ನನ್ನ ಮುದ್ದು ಅರಗಿಣಿ
ನಕ್ಕಾಗ ನೈದಿಲೆ
ನಾಚುವಾಗವಳು ಚಂಚಲೆ

ಕೋಪ ಬಂದಾಗಲಷ್ಟೇ
ಕೊಂಚ ಧಗಧಗ 
ಉರಿವಂತ ಅಗ್ನಿ ಜ್ವಾಲೆ
ಏನು ಮಾಡಲಿ ಹೇಳಿ ?
ಮೌನವಾಗಿರಲೇ
ಹೇಳದೆ ಓಡಿ ಹೋಗಲೇ?

ನನ್ನೆದೆಯ ಏರಿಳಿತ
ಅವಳ ಗೆಜ್ಜೆಯ ನಾದ
ಮನದೊಳಗೆ ಪಿಸುಮಾತು
ಸಮ್ಮೋಹನಾ ವೇದ

ಶರಣಾಗಲೇ ಇಲ್ಲಾ
ಶಿರಭಾಗಿ ವಂದಿಸಲೇ
ಪಾತಾಳವನ್ನೇ ಮುಟ್ಟಿ
ಅವಳ ಹೃದಯದೊಳು 
ಹೊಕ್ಕಲೇ ?

ನೀ ಮುಸುಕಾದರೂ
ನಿನಗೆ ಮುನಿಸೇ ಬಂದು
ಧಗ ಧಗ ಉರಿದರೂ ಸಹ
ನಾ ಶಾಂತವಾಗುವೆ

Friday, September 14, 2012

ನೆಲದ ಸತ್ವ



ನೆಲದ ಸತ್ವ ಸಡಿಲಗೊಂಡು
ಪರಿಹಾಸದಿ ತೊಡಗಿದೆ
ಕುಟಿಲ ಬೀಜ ಮೊಳಕೆ ಬಿರಿದು
ಜಗವೆಲ್ಲ ಹರಡಿದೆ

ಕಾಂತಿ ಹೀನ ಕಣ್ಣುಗಳು
ಜನರ ಕಂಡು ಸೊರಗಿವೆ
ಹಿಂಬಾಗಿಲ ನಾಗರಗಳು
ಹೆಡೆಯತ್ತಿ ಕುಣಿದಿವೆ

ಏನಿದೀ! ಪರಿಹಾಸವು
ಉತ್ತರಗಳ ಹುಡುಕಿದೆ
ಮಣಭಾರದ ಪ್ರಶ್ನೆಗಳೇ
ಶಿರವಬಾಗಿ ನಮಿಸಿವೆ

ಇಳೆಯ ತಂಪು ಎಂದೋ ಸೊರಗಿ
ಜ್ವಾಲೆಯಾಗಿ ಹಬ್ಬುತಿದೆ
ಕಲ್ಮಶಗಳ ಘಾಟು ಹೊಗೆ
ಪ್ರತಿ ಎಲ್ಲೆಯೂ ತಬ್ಬುತಿದೆ

ಸತ್ವಹೀನ ಟೊಳ್ಳು ಮಾತು
ಕನಸನೆಂದು ಕಟ್ಟದು
ಸತ್ಯ ಮರೆತ ಸುಳ್ಳಾಟಕೆ
ಜಯವೆಂಬುದು ದಕ್ಕದು

ಜಗವೆಂಬುದು ಬರಿ ಭ್ರಮೆಯು
ಗೊಂದಲಗಳ ಚಿತ್ರಣ  
ಜಗ್ಗದಿರು ಕಟು ವಾಸ್ತವವೇ ನೀ
ಸೋತರೆ ಅದುವೆ ಮರಣ

Thursday, September 13, 2012

ಹೊನ್ನ ಹೂ

ಅದಮ್ಯ ಸಿರಿಯ ಅಂಚಿನೊಳು
ಕಾಂತಿಯೊತ್ತ ಚಂದ್ರ ಬಿಂಬ
ಕಮಲ ವದನ ನಯನದಲ್ಲಿ
ನಲಿದಾಡುವ ಪುಷ್ಪ ಜಂಬ

ಭೂರಮೆಯ ಚಲುವ ಸೊಬಗು
ಬಾಂದಳವನು ತಟ್ಟಿದೆ
ಬಯಸಿ ಬಂದ ಅಂಧಕಾರ
ನೆಲದೊಡಲನು ಮುಟ್ಟಿದೆ

ಎಲ್ಲೆಡೆಯು ಭವ್ಯ ಬೆರುಗು
ಚಿತ್ತಾರದ ಸುಮಧುರವು
ಮಧುವನವನು ಮೆಟ್ಟಿನಿಂತ
ಮನ್ಮತನ ಬಿಸಿಯಸಿವು

ಗುಡುಗುಡುಗಿ ಸಿಡಿಲಾಯಿತು
ಹನಿ ಮೂಡುವ ತವಕದಲ್ಲಿ
ಇಳೆಯ ಹಸಿವು ಬರಿದಾಯಿತು
ಹೊಸ ಹುರುಪಿನ ಚೆಲುವಿನಲ್ಲಿ

ಎಲ್ಲೆಡೆಯು ಹೊಸ ಕಳೆಯು
ಹೊಸೆದು ಬಂದ ಹೊನ್ನ ಹೂ
ನೆಲದೊಡಲ ಕತ್ತಲರಗಿ
ನಳನಳಿಸುತಿದೆ ಈ ಜಗವು

ಶಾಯರಿ


Tuesday, September 11, 2012

ಕೌತುಕ

ಯಾರು ಚೆಲ್ಲಿಹೋದರೋ
ಇಲ್ಲಿ ಬೀಜವನ್ನು
ಯಾರು ಮಾಡಿದರೋ
ಈ ಸಸಿಗೆ ಆರೈಕೆಯನ್ನು

ಬಣ್ಣ ಬಣ್ಣದ ಹೂಗಳಿಂದ
ಚಿತ್ತಾಕರ್ಷಕವಾಗಿ
ಮಿನುಗುವ ಇದೆಂತಾ
ಕಲಾಕೃತಿಯ ವೈಭವ!

ಹಸಿರು ಬಣ್ಣದ ಥಳುಕು
ಮಿಂಚಿ ಮಿನುಗುವ ಬೆಳಕು
ಕವಿಯ ಕುಂಚದಲ್ಲಿ ಅರಳಿದ
ಕವನದಂತಾ ಚೆಲುವು

ಹುಡುಕಿ ಹೊರಟವರಿಗೆ ಮಾತ್ರ
ಬೆರಗು ಬೈಲಿನ ಸೊಬಗು
ಎಲ್ಲೆ ಎಲ್ಲೆಯಲ್ಲೂ ಸಹ
ಅರಳಿ ನಲಿಯುವಂತ ನಗು

ಪ್ರಕೃತಿಯ ಅಗಾಧತೆಯಲ್ಲಿ
ಎಲ್ಲವೂ ವಿಸ್ಮಯವೇ
ಹರಿದು ಸಾಗುವ ನೀರಲ್ಲೂ
ಕೌತುಕದ ಅನಾವರಣವೇ

Thursday, September 6, 2012

ವಾಸ್ತವ