ನಾನೇನು ಬಲ ಭೀಮನಲ್ಲ.
ಈ ಲೋಕದ ತಪ್ಪುಗಳನ್ನೆಲ್ಲ ಮೆಟ್ಟಿ ತುಳಿಯಲು...
ನಾನೇನು ಅರ್ಜುನನಲ್ಲ.
ಈ ಜಗದ ಪಾಪಗಳ ಒಡೆದು ಉರುಳಿಸಲು...
ನಾನಂತು ಕರ್ಣನಲ್ಲ.
ನನ್ನ ದೇಹವನ್ನು ಇತರರಿಗೆಲ್ಲ ಹರೆದು ಕೊಡಲು...
ನಾನಂತು ಧುರ್ಯೋದನನಲ್ಲ.
ಈ ರಾಜ್ಯ ಸಂಪತನ್ನೆಲ್ಲ ನನ್ನದೇ ಎಂದು ಬಾವಿಸಲು...
ನಾನಂತು ರಾವಣನಲ್ಲ.
ಸದಾ ಇತರರ ಮನಸ್ಸಿಗೆ ಘಾಸಿ ಮಾಡಲು...
ನಾನಂತು ರಾಮನಲ್ಲ.
ವರ್ಷಗಳ ಕಾಲ ಅಜ್ಞಾತವನು ಅನುಭವಿಸಲು...
ನಾನಂತು ಕೃಷ್ಣನೂ ಅಲ್ಲ.
ಭಗವತ್ಗೀತೆಯ ಅರ್ಥದಂತೆ ಈ ಲೋಕಕ್ಕೆ ಮಾದರಿಯಾಗಲು....
ಆದರೆ
ನಾನೊಬ್ಬ ಸಾಮಾನ್ಯ ಮನುಷ್ಯ
ನಾ ಮೆಟ್ಟುವ ದಾರಿಯಲಿ ನಾ
ಉತ್ತಮನಾಗಿ ನುಡಿದು ನಡೆದರೆ ಸಾಕು
ಈ ಮೇಲಿನ ಎಲ್ಲಾ ಪಾತ್ರಗಳನ್ನೂ ಸರಿದೂಗಿಸಬಲ್ಲೆ…
ವಸಂತ್



