ಆ ನಾಲ್ಕು ಸಾಲುಗಳು
ಕವನವಾಗುತ್ತಂತೆ
ಎಷ್ಟೊಂದು ವಿಪರ್ಯಾಸ
ನನಗೆ ನಂಬಲಾಗುತ್ತಿಲ್ಲ
ನೀವಾದರೂ ಹೇಳಿ
ಅದು ಕವನವ ಎಂದು?
ನೆನ್ನೆಯಷ್ಟೆ ಬರೆದಿದ್ದ
ಹತ್ತಾರೂ ಪುಟಗಳನ್ನು
ಸಭೆಯಲ್ಲಿ ವಾಚಿಸಲು ಹೊರಟಾಗ
ಎಲ್ಲರು ಗೊಳ್ ಎಂದು ನಕ್ಕರು
ಕಥೆಯೊಳಗಿನ ಕವನವೆಂದರೆ
ಇದೇನ ಮಗು?
ಹತ್ತಲವು ಪ್ರಶ್ನೆಗಳು
ನನ್ನತ್ತ ದಾವಿಸಿದವು
ಹತ್ತಲವು ಪ್ರಶ್ನೆಗಳು
ನನ್ನತ್ತ ದಾವಿಸಿದವು
ನಾನು ಮೌನವಾದೆ
ಉತ್ತರಿಸಲು ತಡವರಿಸಿದೆ
ಏಕಾಗ್ರತೆಯ ನೆಪವೊಡ್ಡಿ
ಅಲ್ಲಿಂದ ನಿರ್ಗಮಿಸಿದೆ
ಅಲ್ಲಿಂದ ನಿರ್ಗಮಿಸಿದೆ
ನನಗೆ ಅರ್ಥವಾಗುತ್ತಿಲ್ಲ
ಯಾವುದು ಕವನವೋ
ಯಾವುದು ಕಥೆಯೋ
ನಿವಾದರೂ ಹೇಳಿ
ಕಥೆಯೆಂದರೆ ಏನೆಂದು?
ಸಭೆಯಲ್ಲಿನ
ನನ್ನ ಮಾತುಗಳಿಂತಿದ್ದವು
ಕನಸುಗಳ ಕದ್ದು
ಬಯಕೆಗಳ ಹೊದ್ದು
ನೆನಪುಗಳ ಹಾಸಿಗೆಯ ಮೇಲೆ
ಗಾಢವಾಗಿ ನಿದ್ರಿಸುವುದು
ನಾಳೆಯೆಂಬುದು ನೆಪವಷ್ಟೆ
ನೆನ್ನೆಯೆಂಬುದು ಯೋಚನೆಯು
ಆ ನಾಲ್ಕು ಸಾಲುಗಳು
ಕವನವೆಂದರೆ
ಕವನವೆಂದರೆ
ಈ ನನ್ನ ಪದಗಳು ಖಂಡಿತ
ಕಥೆಯಾಗಲೇ ಬೇಕು
ಸಭೆಯಲ್ಲಿನ ನನ್ನ ಸಾಲುಗಳು
ಕಥೆಯಾಗಲಿಲ್ಲ
ಕವನವೂ ಆಗಲಿಲ್ಲ
ಅದಕ್ಕಾಗಿ ನಾನು ಕವಿಯಾಗುತ್ತಿಲ್ಲ.
ಅದಕ್ಕಾಗಿ ನಾನು ಕವಿಯಾಗುತ್ತಿಲ್ಲ.

4 comments:
ಸಭೆಯಲ್ಲಿ ಏನಾದಿರೋ ಗೊತ್ತಿಲ್ಲ ಇಲ್ಲಂತು ಕವಿಯಾದಿರಿ..... ಚೆನ್ನಗಿದೆ
ವಸಂತ್;ನಿಮ್ಮ ಕವಿತೆಗಳನ್ನು ಮೊದಲಿನಿಂದಲೂ ಓದುತ್ತಿರುವವನು ನಾನು.ನಿಮ್ಮ ಕವಿತಾ ಶಕ್ತಿ ಸಾಕಷ್ಟು ಗಟ್ಟಿ ಯಾಗಿದೆ.'ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ'ಎನ್ನುವಂತೆ ನಿಮ್ಮ ಪಾಡಿಗೆ ನೀವು ಕಾವ್ಯ ಕೃಷಿ ಮಾಡುತ್ತಿರಿ.ಒಳಿತಾಗಲಿ.
ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಪ್ರವರವರೆ ...
ನಿಮ್ಮಯ ಪ್ರೋತ್ಸಾಹವೇ ಇದಕ್ಕೆಲ್ಲ ಕಾರಣ ಎಂದರೆ ತಪ್ಪಾಗಲಾರದು ಸರ್ ನಿಮ್ಮೆಲ್ಲರ ತಿಳಿವಳಿಕೆಯ ಮಾತುಗಳಿಂದ ಈ ಹಂತಕ್ಕೆ ತಲುಪಿದ್ದೇನೆ. ಇದಕ್ಕಾಗಿ ನಿಮ್ಮೆಲ್ಲರಿಗೂ ನನ್ನ ತುಂಬು ಮನದ ಧನ್ಯವಾದಗಳು..
Post a Comment